ಜೇನು ತಿನ್ನುವ ಓತಿಕ್ಯಾತ (ಭಾಗ 2)
22 hours 46 minutes ago - ಬರಹಗಾರರ ಬಳಗಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ. ಇಷ್ಟು ಸಿಕ್ಕಿತಂತೆ ಎಂದು ಹೇಳಿದ. ನಮಗೋ ಹಣ ಸಿಗುತ್ತಲೇ ಇರಲಿಲ್ಲ. ಹಣ ಸಿಕ್ಕರೆ ಅಂಗಡಿಯಲ್ಲಿ ಏನಾದರೂ ಕೊಂಡು ತಿನ್ನಬಹುದು ಎಂದು ಎಷ್ಟು ಹಂಬಲಿಸಿದರೂ ನಮಗೆ ನಯಾಪೈಸೆಯೂ ಸಿಗದೇ ಹಣ ಎಂದರೆ ನಿದ್ದೆಯಲ್ಲೂ ಹಪಾಹಪಿಸುವಂತಾಗಿದ್ದೆವು.ನಮ್ಮ ಹಸಿವು ನೀಗದೇ ಅಂಗಡಿಗೆ ಹೋದಾಗ ಕಾಣುತ್ತಿದ್ದವೆಲ್ಲಾ ತಿನ್ನಬೇಕೆನಿಸಿದರೂ ಏನನ್ನೂ ಕೊಳ್ಳಲಾಗದೇ, ತಿನ್ನಲಾಗದೇ ಯಾರಾದರೂ ಸಂಬಂಧಿಕರು ಒಂದೋ ಎರಡೋ ರೂಪಾಯಿಯನ್ನು ಕೊಟ್ಟರೆ ಇದರಲ್ಲಿ ಯಾರದ್ದೂ ಕಿಂಚಿತ್ತೂ ಪಾಲಿಲ್ಲವೆಂದೂ ಇದು ಸಂಪೂರ್ಣ ನನಗೆ ಮಾತ್ರ ಸೇರಿದ ಏಕ ಮಾತ್ರ ಸ್ವತ್ತೆಂಬಂತೆ ಜೋಪಾನವಾಗಿ ಕಾಪಿಟ್ಟುಕೊಳ್ಳುತ್ತಿದ್ದ ನಮಗೆ ದುಡ್ಡು ಸಿಗುತ್ತದೆ ಎಂದರೇ ಏನಾದರೂ ಸರಿಯೇ ಅದು ಮಾಡಲು ತಯಾರಿದ್ದೆವು. ಅಂದು ಅವನ ಒತ್ತಾಸೆ ಏನಿತ್ತೆಂದರೇ ಈಗಲೇ ಇಬ್ಬರೂ ಓತೀಕ್ಯಾತ ಶಿಕಾರಿಗೆ ಇಳಿಯಬೇಕೆಂಬ ರೀತಿಯಲ್ಲಿ ಇತ್ತು. ಆದರೆ ಅಂದು ಮತ್ತೊಂದು ಕೆಲಸ ನಿಗದಿಯಾದ್ದರಿಂದ ನಾಳೆ ಶನಿವಾರ ಅಲ್ಲವೇ...? ನಾಳೇ ಶಾಲೆ ಬಿಟ್ಟಮೇಲೆ ಓತೀಕ್ಯಾತಗಳ ಶಿಕಾರಿ ಮಾಡೋಣ ಎಂದು ಶಿಕಾರಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಒಂದು ವಿಚಾರ ನಮ್ಮ ತಲೆಯಲ್ಲಿ ರೋಮಾಂಚನ ಉಂಟು ಮಾಡಿತ್ತು. ಅದರಂತೆ ಅವುಗಳನ್ನು ಹೊಡೆದು ಮಣ್ಣಲ್ಲಿ ಹೂತು ಹಾಕಿದ್ದೂ ಆಯಿತು. ಇದು ಅಷ್ಟೇನು ಕೆಲಸಮಾಡಲಿಲ್ಲವಾದರೂ ಕಾಕತಾಳೀಯ ಎಂಬಂತೆ ಒಮ್ಮೆ ನಾಟಕ ಆಡಿದ ಮರುದಿನ ಬೆಳ್ಳಂಬೆಳಿಗ್ಗೆ ನಾನಾ ಮುಖಬೆಲೆಯ 29 ರುಪಾಯಿ ನಾಣ್ಯಗಳು ಈಚನಿಗೆ ಸಿಕ್ಕಿತ್ತು..!!ನನಗೂ ಅಲ್ಲೊಂದ… ಮುಂದೆ ಓದಿ...