ಕಲಿಕೆಯ ಹಾದಿ ದಿಕ್ಕು ತಪ್ಪದಿರಲಿ...
9 hours 32 minutes ago - ಬರಹಗಾರರ ಬಳಗಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು ಗೌಣವಾಗಿ ಬಿಟ್ಟದ್ದಂತೂ ಸತ್ಯ. ಈ ಮಧ್ಯೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿಯಾಗಿದೆ. ಮತ್ತಷ್ಟು ಮಂದಿ ಮನೆ ಬಿಟ್ಟು ಓಡಿದ್ದೂ ಇದೆ.
ಇಲ್ಲಿ ಮುಧೋಳದ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ 625 ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾಳೆ. ಅವಳ ಸಾಧನೆಗೆ ಅಭಿನಂದನೆಗಳು. 7 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದಿದ್ದರೆ, 14 ಮಂದಿ 623, 21 ಮಂದಿ 622, 44 ಮಂದಿ 621 ಹಾಗೂ 64 ಮಂದಿ 620 ಅಂಕಗಳನ್ನು ಪಡೆದು ಉತ್ತಮ ಸಾಧಕರಾಗಿ ಮೂಡಿಬಂದಿದ್ದಾರೆ. ಇವರ ಸಾಧನೆ ಅಂಕಿತಾಳಿಗಿಂತ ಕಡಿಮೆಯೇನಲ್ಲ...! ಆದರೆ ಯೋಗ ಅವರಿಗಿರಲಿಲ್ಲ...!!
ಎಸ್ ಎಸ್ ಎಲ್ ಸಿ ಅಂಕಗಳು ಬದುಕನ್ನು ನಿರ್ಣಯಿಸದು. ಆದರೆ ಬದುಕಿಗೊಂದು ದಿಕ್ಕು ತೋರಿಸಬಹುದು. ಉತ್ತಮ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಲಷ್ಟೆ ಸದ್ಯಕ್ಕೆ ಅಂಕಗಳು ಸೀಮಿತಗೊಂಡಿರುವುದು ವಾಸ್ತವ. ಇದು ವಿದ್ಯಾರ್ಥಿ ಜೀವನದ ಮೊದಲ ಪ್ರಮುಖ ಪರೀಕ್ಷೆಯೆಂಬುವುದು ನಿಸ್ಸಂಶಯ. ಉತ್ತಮ ಅಂಕ ಪಡೆದವರು ಮಾತ್ರವೇ ಬದುಕನ್ನು ಗೆಲ್ಲಬಲ್ಲರು ಎಂಬುವುದು ರುಜುವಾತು ಪಡಿಸಲಾಗದು. ಕಡಿಮೆ ಅಂಕ ಪಡೆದವರು ಬದುಕನ್ನು ಗೆದ್ದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ.
ಇನ್ನು ಉತ್ತಮ ಅಂಕಗಳನ್ನು ಪಡೆದ ವಿಧಾನ (process) ಕೂಡಾ ಮುಖ್ಯವಾಗುತ್ತದೆ. ಹತ್ತಾರು ವರ್ಷಗಳ ಪ್ರಶ್ನೆಪತ್ರಿಕೆ ಉರು ಹೊಡೆದು ಪರೀಕ್ಷೆಯನ್ನೇ ಗುರಿಯಾಗಿಟ್ಟುಕೊಂಡು ಪಡೆದ ಅಂಕಗಳು ವಿದ್ಯಾರ್ಥಿಯ ನೈಜ ಪ್ರತಿಭೆಯ… ಮುಂದೆ ಓದಿ...