‘ಮಯೂರ' ಹಾಸ್ಯ - ಭಾಗ ೬೮
1 day 4 hours ago - Ashwin Rao K Pನಿಧಾನವಾಗಿ ಮಾಡಿ
ಪಕ್ಷ ಮಾಸದ ಒಂದು ದಿನ. ಮನೆ ಪಕ್ಕದ ಗೀತಾ ಮಾಮಿ ಪುಟ್ಟ ಶಾಸ್ತ್ರಿಗೆ ಊಟಕ್ಕೆ ಹೇಳಿದ್ದರು. ಮದ್ಯಾಹ್ನ ಊಟದ ಹೊತ್ತಿಗೆ ಪುಟ್ಟ ಶಾಸ್ತ್ರಿ ಪಂಚೆ ಉಟ್ಟು ಹೋದ. ಊಟಕ್ಕೆ ಎಲೆ ಹಾಕಿ, ಭಟ್ಟರೊಂದಿಗೆ ಕೂಡಿಸಿ, ‘ನಿಧಾನವಾಗಿ ಊಟ ಮಾಡು' ಎಂದು ಪೂರಿ, ವಡೆ, ರವೆ ಪಾಯಸ ಹಾಕಿದರು. ಅದು ಖಾಲಿಯಾಗುತ್ತಿದ್ದಂತೆಯೇ ಮತ್ತೆ ಹಾಕಿದರು. ಎಲೆ ಮೇಲೆ ಏನೂ ಬಿಡಬಾರದು ಎನ್ನುವುದನ್ನು ಅಪ್ಪನಿಂದ ಕಲಿತಿದ್ದ ಶಾಸ್ತ್ರಿ, ಹೊಟ್ಟೆ ತುಂಬಿದರೂ ಎಲೆ ಖಾಲಿ ಮಾಡಿ ಒದ್ದಾಡತೊಡಗಿದ. ಪಕ್ಕದಲ್ಲಿ ಕೂತ ಭಟ್ಟರು ಕಿವಿಯಲ್ಲಿ ಮೆಲ್ಲಗೆ, ‘ಎಲೆ ಮೇಲೆ ಸ್ವಲ್ಪವಾದರೂ ಬಿಡಬೇಕು. ಇಲ್ಲದಿದ್ರೆ ಹಾಕ್ತಾನೆ ಇರ್ತಾರೆ. ಉಳಿಸಿದರೆ ಮಾತ್ರ ಹಿರಿಯರಿಗೆ ತೃಪ್ತಿಯಾದಂತೆ..' ಎಂದಾಗ ಶಾಸ್ತ್ರಿ ಬೆಪ್ಪಾದ.
-ರಾಮಕೃಷ್ಣ ಗೋಖಲೆ ಸೊರಬ
***
ವರ್ಷಕ್ಕಾಗ ಬೇಕು
ಅಂದು ಮುಂಬೈಯಿಂದ ಬಂದ ನಮ್ಮ ಅಣ್ಣನ ಮೊಮ್ಮಗ ಹರ್ಷ ಮತ್ತು ಬೆಳಗಾವಿಯ ಅವನ ಅಣ್ಣ ನಕುಲ ನನ್ನೊಂದಿಗೆ ಹೊರಗೆ ಬಂದಿದ್ದರು. ನಾನು ಅವರಿಬ್ಬರನ್ನೂ ನನ್ನ ಗೆಳೆಯ ಜಿತೇಂದ್ರನ ಅಂಗಡಿಯಲ್ಲಿ ಕೂಡ್ರಿಸಿ ನನ್ನ ಕೆಲಸಕ್ಕೆ ಹೋದೆ. ಜೀತೇಂದ್ರ ಇವರಿಬ್ಬರಿಗೂ ಬಾಳೆಹಣ್ಣು ತಿನ್ನಲು ಹೊಟ್ಟಿದ್ದ. ಅವರು ಬಾಳೆಹಣ್ಣು ತಿಂದು, ಅದರ ಸಿಪ್ಪೆಯನ್ನು ಅತ್ಯಂತ ಕಾಳಜಿಯಿಂದ ಒಂದು ಕವರಿನಲ್ಲಿ ಹಾಕಿಕೊಂಡು ಇಟ್ಟುಕೊಂಡರು. ಕೇಳಿದರೆ, ‘ವರ್ಷಕ್ಕಾಗ ಬೇಕು' ಎಂದು ಹೇಳಿದರು. ಮನೆಗೆ ಬಂದೊಡನೆ ಓಡಿ. ‘ವರ್ಷಕ್ಕಾ, ನಿನಗ ಮುಖಕ್ಕ ಹಚ್ಕೊಳಾಕ ತಂದೇವ ನೋಡ' ಎಂದು ನನ್ನ ಮಗಳಿಗೆ ಬಾಳೆಹಣ್ಣಿನ ಸಿಪ್ಪೆ ಹಾಕಿದ್ದ ಕವರ್ ಕೊಟ್ಟಾಗ ಎಲ್ಲರೂ ನಕ್ಕರು.
-ರವಿ ಮುನವಳ್ಳಿ
***
ಕಣ್ಣೇಕೆ ಕೆಂಪು
ಮೊಮ್ಮಗಳು ಸಿರಿಗೆ ಮೂರು ವರ್ಷವಿದ್ದಾಗ ಮೊಬೈಲ್ ನೋಡುವುದು ಅಭ್ಯಾಸವಾಗಿತ್ತು. ಅದನ್ನು ತಪ್ಪಿಸಬೇಕೆಂದು… ಮುಂದೆ ಓದಿ...