‘ಮಯೂರ' ಹಾಸ್ಯ - ಭಾಗ ೭೧
1 day 17 hours ago - Ashwin Rao K Pಕೂಬಸ್
ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆಟ್ಟು ಹೋಯಿತು ಅಂಗಡಿಯವನಿಗೆ. ಮಗುವನ್ನು ಎತ್ತಿಕೊಂಡು ನಿನಗೆ ಯಾವ ಬಸ್ಸು ಬೇಕೋ ತೆಗೆದುಕೋ ಎಂದು ಆಟಿಕೆಗಳ ಶೆಲ್ಫ್ ಬಳಿ ಕರೆದುಕೊಂಡು ಹೋದ. ಅಲ್ಲಿದ್ದ ರೈಲನ್ನು ಗಬಕ್ಕನೆ ತೆಗೆದುಕೊಂಡು, ಖುಷಿಯಿಂದ ‘ಕೂ...ಬಸ್, ಚುಕುಬುಕು ಚುಕುಬುಕು...;ಅಂತಾ ಬಾಯಿಗೆ ಕೈಯಿಟ್ಟು ಕೂಗತೊಡಗಿದಾಗ ಎಲ್ಲರೂ ಹಣೆಚಚ್ಚಿಕೊಂಡಿದ್ದಾಯಿತು.
-ನಳಿನಿ ಟಿ ಭೀಮಪ್ಪ
***
ನೀರು, ಎಳನೀರು
ನನಗೆ ಜ್ವರ ಕಾಣಿಸಿಕೊಂಡಿತ್ತು. ಮಾತ್ರೆ ತೆಗೆದುಕೊಂಡೆ. ಜ್ವರ ಹೋದರೂ ಸುಸ್ತು ಕಡಿಮೆಯಾಗಲಿಲ್ಲ. ಚಿಕ್ಕಮ್ಮ ವೈದ್ಯರ ಬಳಿ ಕರೆದುಕೊಂಡುಹೋದರು. ತಪಾಸಣೆಯ ಬಳಿಕ ವೈದ್ಯರು ‘ನಿರ್ಜಲೀಕರಣ ಆಗಿದೆ. ಹೆಚ್ಚು ನೀರು, ಎಳನೀರು ಕುಡಿಬೇಕು' ಅಂದರು. ‘ಮಾತ್ರೆ ಬರ್ಕೊಡ್ತೀರಾ? ಚಿಕ್ಕಮ್ಮ ಕೇಳಿದರು. ಒಂದೆರಡು ಮಾತ್ರೆ ಬರೆದುಕೊಟ್ಟ ವೈದ್ಯರು, ‘ಚೆನ್ನಾಗಿ ನೀರು ಕುಡಿಬೇಕು ತಿಳೀತಾ?’ ಅಂದರು. ‘ವಾರದಿಂದ ಸುಸ್ತು ಕಡಿಮೆಯಾಗಿಲ್ಲ, ಏನಾದರೂ ಪರೀಕ್ಷೆ ಮಾಡಿಸಬೇಕಾ ಹೀಗೆ?’ ಚಿಕ್ಕಮ್ಮ ಮತ್ತೆ ಕೇಳಿದರು. ‘ಬೇಡ, ನೀರು, ಎಳನೀರು ಕುಡಿತಾ ಇರಲಿ. ಸಾಕು' ಎಂದರು. ಆಚೆ ಬಂದಾಗ ಬಿಲ್ಲಿಂಗ್ ಕೌಂಟರ್ ನಲ್ಲಿ ೨೦೦ ರೂಪಾಯಿ ಕನ್ಸಲ್ಟೇಷನ್ ಫೀ ಎಂದರು. ಚಿಕ್ಕಮ್ಮ ‘ನೂರೈವತ್ತು ತಗೊಳ್ಳಿ ಸಾಕು. ನಿಮ್ಮ ಡಾಕ್ಟ್ರು ನೀರು, ಎಳನೀರು ಕುಡಿಲಿ ಅನ್ನದು ಬಿಟ್ರೆ ಬೇರೇನೂ ಹೇಳಿಲ್ಲ.’ ಅಂದಳು.
-ಕಾವ್ಯಾ ಹೀರೇಮಠ
***
ಆಧಾರ-ಆಧಾರ್
ಈಚೆಗೊಂದು ದಿನ ಶಾಲಾ ಸ್ಟಾಫ್ ರೂಮಿನಲ್ಲಿ ಸಹೋದ್ಯೋಗಿಗಳೊಂದಿಗೆ ಕೂತಿರುವಾಗ, ಆ… ಮುಂದೆ ಓದಿ...