ವಚನಬಿಂದು

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ.

ಸಂಪತ್ತಿನ ಸಮಾನ ಹಂಚಿಕೆ...

ಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ? ಇದು ಸಾಧ್ಯವೇ ? ಇದರ ಅಗತ್ಯತೆ ಏನು ?  ಇದು ಅನಿವಾರ್ಯವೇ ? ಇದನ್ನು ಒಪ್ಪಿಕೊಳ್ಳಬೇಕೆ ? ಅಥವಾ ತಿರಸ್ಕರಿಸಬೇಕೆ ? ಅಥವಾ  ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ ?  ಈ ಬಗೆಯ ಚರ್ಚೆಗಳು ರಾಜಕೀಯ ಪಕ್ಷಗಳಲ್ಲಿ, ವಿಚಾರವಾದಿಗಳಲ್ಲಿ  ಮತ್ತು  ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದೆ. ಈಗ ಮತ್ತೆ ಚರ್ಚೆಯಾಗುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೪೭)- ಅನುಭವಿಸು

ಹೇಳುವುದು ತುಂಬಾ ಸುಲಭ. ಆದರೆ ಅದನ್ನ ಅನುಭವಿಸಿ ನಿನ್ನ ಅನುಭವಗಳು ಅದರೊಳಗೆ ಮೇಳೈಸಿದಾಗ ನಿನಗೆ ಅರ್ಥವಾಗುತ್ತೆ. ತಂಗಿಯ ಮಾತು ಸ್ವಲ್ಪ ಖಾರವಾಗಿತ್ತು. ಇದು ಕಳೆದ ಚುಣಾವಣೆಯ ಸಂಧರ್ಭದಲ್ಲಿ ನಡೆದ ಘಟನೆ. ವರ್ಷಗಳು ದಾಟಿದ ನಂತರ ನನಗೂ ಅವಕಾಶ ಸಿಕ್ಕಿತು. ಚುಣಾವಣೆಯ ಹಿಂದಿನ ತಯಾರಿ, ರಾತ್ರಿ ಕೆಲಸ, ಸತತ ಬರವಣಿಗೆ, ಸಣ್ಣ ಸಣ್ಣ ಸೂಕ್ಷ್ಮ ಸಂಗತಿಗಳೆಲ್ಲ ಮನವರಿಕೆ ಆದವು.

Image

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 1)

ಅಪ್ಪ ಕಟು ಸ್ವಾವಲಂಬಿ.‌ ತನಗೆ ಗೊತ್ತಿಲ್ಲದ ಎಂಥಹ ಕೆಲಸವನ್ನಾದರೂ  ತಾನು ನೋಡಿರುವ ಕೇಳಿರುವ ಜ್ಞಾನದಿಂದ  ಜನ ನೋಡಿ ನಕ್ಕರೂ ಬಿಡದೇ ಅದನ್ನು ಮಾಡಲು ಹಿಂಜರಿಯದೇ ಮಾಡಿ ಸಾಧಿಸುತ್ತಿದ್ದರು. ಅದು ಸರಿಯಾದ ಲೆಕ್ಕಚಾರವಾಗಿಯೋ, ಶಾಸ್ತ್ರೀಯವಾಗಿಯೋ  ಎನ್ನದೇ ತಮಗೆ ತೋಚಿದ ಐಡಿಯಾ ಮತ್ತು ಅವರದೇ Tools ಗಳಿಂದ ಮಾಡುತಿದ್ದರು.

Image

ಚುನಾವಣೆಯ ಕಥೆಗಳು

ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಕರ್ನಾಟಕ ರಾಜ್ಯದಲ್ಲೂ ಎಪ್ರಿಲ್ ೨೬ ಮತ್ತು ಮೇ ೭ ಎಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಮತದಾನ. ಎಲ್ಲಾ ಅರ್ಹ ಮತದಾರರು ಯಾವುದೇ ನೆಪ ಹೇಳದೇ ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ. ನಿಮ್ಮ ಒಂದು ಮತ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ತರಬಹುದು.

Image

ನೀರು ಜೀವಜಲ, ತೀರ್ಥದಂತೆ ಬಳಸೋಣ

ಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರು ಮಳೆ ಬರುವ ತನಕ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಹಿಂದಿನ ಕೆಲವು ವರುಷಗಳಲ್ಲಿಯೂ ನೀರಿನ ಕೊರತೆ ತೀವ್ರವಾಗಿ, ನೀರಿನ ರೇಷನಿಂಗ್ ಜ್ಯಾರಿಯಾಗಿತ್ತು. ಅರುವತ್ತು ಕಿಮೀ ದೂರದ ಉಡುಪಿಯ ನೀರಿನ ಮೂಲವಾದ ಜಲಾಶಯದಲ್ಲಿಯೂ ಕೆಲವೇ ದಿನಗಳಿಗಾಗುವಷ್ಟೇ ನೀರುಳಿದಿದೆ.

2024ರ ಬೇಸಗೆಯಲ್ಲಿಯೂ ಮಂಗಳೂರು ಮತ್ತು ಉಡುಪಿಯಲ್ಲಿ ನಾಗರಿಕರಿಗೆ ನೀರಿನ ಲಭ್ಯತೆ ಆತಂಕಕಾರಿಯಾಗಿಯೇ ಮುಂದುವರಿದಿದೆ.  

Image

ಎಚ್ಚರ, ಮಕ್ಕಳು ನಿಮ್ಮನ್ನು ಅನುಸರಿಸುತ್ತಿದ್ದಾರೆ !

ಹೌದು, ಮಕ್ಕಳು ಸಣ್ಣವರಿರುವಾಗ ಹೆಚ್ಚಾಗಿ ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಕ್ರಮ ಮೊದಲಾದ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುತ್ತಾರೆ. ಪ್ರತೀ ದಿನ ಗಲಾಟೆ ಮಾಡಿಕೊಳ್ಳುವ ದಂಪತಿಗಳ ಮಕ್ಕಳು ಹೆಚ್ಚಾಗಿ ಒಂದೋ ಅಂತರ್ಮುಖಿಯಾಗಿರುತ್ತಾರೆ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.

Image

ವಿವಾದಾಸ್ಪದ ಪ್ರಸ್ತಾಪ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಸ್ತಾಪವೊಂದು ಈಗ ವಿವಾದ ಸೃಷ್ಟಿಸಿದ್ದರಲ್ಲಿ ಅಚ್ಚರಿಯಿಲ್ಲ. ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆಯಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಣಾಳಿಕೆಯು, ಸಂಪತ್ತಿನ ಹಂಚಿಕೆಯಲ್ಲಿ ಎಲ್ಲರಿಗೂ ಸಮಾನತೆಯಿರಬೇಕು ಎಂಬಂತಹ ಮಾತುಗಳನ್ನಾಡಿದೆ.

Image